ದುಬೈನತ್ತ ‘ದಿಲ್‌ವಾಲನ ಪಯಣ
Posted date: 23 Tue, Apr 2013 – 10:26:50 AM

 ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸುತ್ತಿರುವ ‘ದಿಲವಾಲ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮತ್ತು ಒಂದು ಸಾಹಸ ಸನ್ನಿವೇಶದ ಚಿತ್ರೀಕರಣ ಬಾಕಿಯಿದೆ. ಹಾಡಿನ ಚಿತ್ರೀಕರಣ ಮಾಸಾಂತ್ಯಕ್ಕೆ ದುಬೈನಲ್ಲಿ ನಡೆಯಲಿದೆ. ಸಾಹಸ ಸನ್ನಿವೇಶವನ್ನು ಅದ್ದೂರಿ ಸೆಟ್‌ನಲ್ಲಿ ಚಿತ್ರಿಸಿಕೊಳ್ಳುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
    ಅನಿಲ್‌ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಸುಮಂತ್ ಅಭಿನಯಿಸುತ್ತಿದ್ದಾರೆ. ರಾಧಿಕಾಪಂಡಿತ್ ‘ದಿಲವಾಲ ಚಿತ್ರದ ನಾಯಕಿ. ಜೈಜಗದೀಶ್, ವೀಣಾಸುಂದರ್, ಹೊನ್ನವಳ್ಳಿ ಕೃಷ್ಣ, ಶರತ್‌ಲೋಹಿತಾಶ್ವಾ, ರವಿಶಂಕರ್, ರಂಗಾಯಣರಘು, ಸಾಧುಕೋಕಿಲಾ, ಪವನ್, ಬ್ಯಾಂಕ್‌ಜನಾರ್ದನ್, ಬುಲೆಟ್‌ಪ್ರಕಾಶ್ ಹರೀಶ್‌ರಾಯ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.
      ಅರ್ಜುನ್‌ಜನ್ಯರ ಸಂಗೀತವಿರುವ ಈ ಚಿತ್ರಕ್ಕೆ ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. ಲಕ್ಷ್ಮಣ್‌ರೆಡ್ಡಿ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಹರ್ಷ, ಮುರಳಿ ನೃತ್ಯನಿರ್ದೇಶನ, ಹಾಗೂ ಪಳನಿರಾಜ್ ಅವರ ಸಾಹಸ ನಿರ್ದೇಶನ ‘ದಿಲವಾಲ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed